ABC

Wednesday, 13 March 2019

ನಮ್ಮ ಪಕ್ಷದ ಕಾರ್ಯಕರ್ತರೇ ನನ್ನ ಸೈನಿಕರು: ನಿಖಿಲ್ ಕುಮಾರಸ್ವಾಮಿ.

ಮಂಡ್ಯ: ಇಂದಿನಿಂದ ಅಧಿಕೃತ ಪ್ರವಾಸ ಆರಂಭವಾಗಿದ್ದು, ಹಲವಾರು ಟೆಂಪಲ್‌ಗೆ ಭೇಟಿ ನೀಡಿ ದೇವರನ್ನು ಪ್ರಾರ್ಥಿಸಿದ್ದೇನೆ ಎಂದು ಮಂಡ್ಯ ಲೋಕಸಭಾ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕಾಂಕನಹಳ್ಳಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದಿನಿಂದ ಅಧಿಕೃತ ಪ್ರವಾಸ ಆರಂಭವಾಗಿದ್ದು, ಹಲವಾರು ಟೆಂಪಲ್‌ಗೆ ಭೇಟಿ ನೀಡಿ ದೇವರನ್ನು ಪ್ರಾರ್ಥಿಸಿದ್ದೇನೆ ಮನೆ ಮಗನ ರೀತಿ ಸ್ವಾಗತ ಸಿಕ್ಕಿದೆ ಎಂದರು.

ಇನ್ನು ನಮ್ಮ ಕುಟುಂಬ ದೇವರನ್ನು ನಂಬುತ್ತೆ, ಕುಟುಂಬದ ಏಳಿಗೆಗೆ ದೇವರು ಕಾರಣ. ನಾವು ಚುನಾವಣೆ ಅಂತ ಪೂಜೆ ಸಲ್ಲಿಸಲು ಹೋಗಲ್ಲ. ಯಾವಾಗಲೂ ದೇವರಿಗೆ ಪೂಜೆ  ಸಲ್ಲಿಸುತ್ತೇವೆ ಎಂದು ತಿಳಿಸಿದರು.ಸದ್ಯ ರಾಜಕಾರಣ ಸಂಬಂಧ ಹಾಳು ಮಾಡಬಾರದು. ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ, ರಾಜಕಾರಣ ಸಂಬಂಧ ಹಾಳು ಮಾಡಲು ಬಿಡಲ್ಲ. ಅಭಿ, ನಾನು ಇಬ್ಬರು ಬ್ಯುಸಿ ಇದ್ದೇವೆ. ಇತ್ತೀಚೆಗೆ ಇಬ್ಬರು ಮಾತನಾಡಿಲ್ಲ, ಚುನಾವಣೆ ನಂತರ ಫ್ರೀ ಆಗಿ ಮಾತನಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...