ABC

Saturday, 2 February 2019

ಬಿಜೆಪಿ‌ ಮುಖಂಡರಿಗೆ ಮಾನ ಮರ್ಯಾದೆ ಇಲ್ಲ: ಡಿ.ಕೆ.ಸುರೇಶ್

ಬಿಜೆಪಿ‌ ಮುಖಂಡರಿಗೆ ಮಾನ ಮರ್ಯಾದೆ ಇಲ್ಲ, ಮೈತ್ರಿ ಸರ್ಕಾರ ರಚನೆಯಾದಾಗಲಿಂದಲೂ ತೊಂದರೆ ಕೊಡುತ್ತಲೆ ಇದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಉರುಳಿಸಲು ಕುದುರೆ ವ್ಯಾಪಾರ ಮಾಡುತ್ತಲೆ ಇದ್ದಾರೆ. ಇಂದಿಗೂ ಕೂಡ ನಮ್ಮ‌ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಮಿಷ ಒಡ್ಡುತ್ತಲೆ ಇದ್ದಾರೆ. ಬಿಜೆಪಿ ಮುಖಂಡರ ಕನಸು ಎಂದಿಗೂ‌ ಹಿಡೇರುವುದಿಲ್ಲ ಎಂದರು.

ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುವುದೇ ಅನುಮಾನ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿಕೆಗೆ ಸಂಸದ ಡಿಕೆ.ಸುರೇಶ್ ಪ್ರತಿಕ್ರಿಯೇ ನೀಡಿದ್ದು, ಕುಮಾರಸ್ವಾಮಿ ಬಜೆಟ್ ಮಾಡೇ ಮಾಡುತ್ತಾರೆ ಅದರಲ್ಲಿ‌ ಯಾವುದೇ ಅನುಮಾನ ಬೇಡ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...