ABC

Wednesday, 6 February 2019

ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಬೇಕು: ಸುಪ್ರೀಂಕೋರ್ಟ್ ಮಹತ್ವದ ಆದೇಶ.

ಸುಪ್ರೀಂಕೋರ್ಟ್ ಉತ್ತರಪ್ರದೇಶದ ಸರ್ಕಾರಕ್ಕೆ ಪ್ರಶ್ನಿಸುತ್ಯ ಮೊದಲಿನಿಂದಲೂ ರಾಜಕೀಯ ನಾಯಕರು, ಮಂತ್ರಿಗಳು ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಎಂಬ ನಿಯಮವಿದ್ದರೂ ಇವರೆಲ್ಲಾ ಯಾಕೆ ಅದನ್ನ ಪಾಲಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಉತ್ತರಪ್ರದೇಶದ ಸರ್ಕಾರಿ ಪ್ರಾಥಮಿಕ ವಿದ್ಯಾಲಯಗಳಲ್ಲಿನ ಸ್ಥಿತಿಯನ್ನ ಸುಧಾರಿಸಲು ಸರ್ಕಾರಿ ನೌಕರರು ಹಾಗು ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿಸಬೇಕು ಎಂಬ ಆದೇಶವನ್ನ ಉಲ್ಲೇಖಿಸುತ್ತ ಸುಪ್ರೀಂಕೋರ್ಟ್ ಉತ್ತರಪ್ರದೇಶದ ಜನರಲ್ ಸೆಕ್ರೆಟರಿ ಅನುಪ್ ಚಂದ್ರ ಪಾಂಡ್ಯ ಗೆ ಅವಮಾನನಾ ನೋಟಿಸ್ ಕಳಿಸಿದೆ.

ಜಾಗರಣ್ ಪತ್ರಿಕೆಯ ರಿಪೋರ್ಟಿನ ಪ್ರಕಾರ, ನ್ಯಾಯಮೂರ್ತಿ ಎಕೆ ಸಿಕ್ರಿ ಹಾಗು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ರವರ ಪೀಠವು ಕಳೆದ ಫೆಬ್ರುವರಿಯಲ್ಲಿ ಶಿವಕುಮಾರ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರ್ಕಾರದ ಜನರಲ್ ಸೆಕ್ರೆಟರಿಗೆ ನೋಟಿಸ್ ಕಳಿಸಿದೆ.
ತ್ರಿಪಾಠಿಯವ್ಮರು ಆಗಷ್ಟ್ ೧೮, ೨೦೧೫ ರಂದು ಅಲಹಾಬಾದ್ ಹೈಕೋರ್ಟ್ ಆದೇಶವನ್ನ ಈವರೆಗೂ ಯಾಕೆ ಪಾಲಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಉತ್ತರಪ್ರದೇಶದ ಮುಖ್ಯ ಸಚಿವನ ವಿರುದ್ಧ ನೋಟಿಸ್ ಜಾರಿ ಮಾಡಿದೆ.‌

ಅರ್ಜಿದಾರನ ಆರೋಪದ ಪ್ರಕಾರ ಸರ್ಕಾರದ ಮುಖ್ಯ ಸಚಿವ ಹೈಕೋರ್ಟಿನ ಆದೇಶವನ್ನ ಪಾಲಿಸಲು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ತಾನು ಈ ವಿಷಯವನ್ನ ಮುಖ್ಯ ಸಚಿವರ ಗಮನಕ್ಕೆ ತಂದಿದ್ದು ಉತ್ತರಪ್ರದೇಶದ ಬೇಸಿಕ್ ಎಜ್ಯುಕೇಷನ್ ಬೋರ್ಡ್ ವತಿಯಿಂದ ನಡೆಸುತ್ತರುವ ಶಾಲೆಗಳ ಶಿಕ್ಷಣವನ್ನ ಸುಧಾರಿಸುವಂತೆ ಕೋರಿದ್ದೆ ಎಂದಿದ್ದಾರೆ.

ಆದರೆ ಸರ್ಕಾರದ ಮುಖ್ಯಸಚಿವರು ಈ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಶಿವಕುಮಾರ್ ತ್ರಿಪಾಠಿಯವರು ಹೈಕೋರ್ಟ್ ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದರು, ಆದರೆ ವಿಷಯದ ಗಂಭೀರತೆಯನ್ನೇ ಅರಿಯದ ಹೈಕೋರ್ಟ್ ಅವರ ಅರ್ಜಿಯನ್ನ ವಜಾಗೊಳಿಸಿತ್ತು. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿರುವಂತೆ ಈ ಪ್ರಕರಣ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪ್ಟ ವಿಷಯವಾಗಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿ ಎಂದು ತ್ರಿಪಾಠಿ ಕೇಳಿಕೊಂಡಿದ್ದರು.

ಅಲಹಾಬಾದ್ ಹೈಕೋರ್ಟಿನ ಆಗಷ್ಟ್ ೧೮, ೨೦೧೫ ರ ಆದೇಶದಲ್ಲಿ ಉತ್ತರಪ್ರದೇಶ ಬೇಸಿಕ್ ಶಿಕ್ಷಣ ಬೋರ್ಡ್ ನ ಶಾಲೆಗಳಲ್ಲಿನ ಶಿಕ್ಷಣದ ಮೌಲ್ಯಗಳ ಕುಸಿತವನ್ನ ಕಂಡು ಚಿಂತೆ ವ್ಯಕ್ತಪಡಿಸುತ್ತ ಬ್ಯೂರೋಕ್ರ್ಯಾಟ್, ರಾಜಕೀಯ ನಾಯಕರು, ಮಂತ್ರಿಗಳ ಮಕ್ಕಳು ಪ್ರೈವೆಟ್ ಶಾಲೆಗಳಲ್ಲಿ ಓದುತ್ತಿರುವ ಕಾರಣ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ತಲುಪಿದೆ ಎಂದು ಹೇಳಿತ್ತು. ಈಗ ಸುಪ್ರೀಂಕೋರ್ಟ್ ಉತ್ತರಪ್ರದೇಶದ ಮುಖ್ಯಸಚಿವನಿಗೆ ಈ ಆದೇಶವನ್ನ ಪಾಲೊಸುವಂತೆ ಕಟ್ಟಪ್ಪಣೆ ಹೊರಡಿಸಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...