ಚಾಮರಾಜನಗರ: ಒಂಟಿ ಸಲಗವನ್ನು ನಾಡಬಂದೂಕಿನಿಂದ ಕೊಂದು ದಂತ ಹೊತ್ತೊಯ್ದಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಕೊತ್ತನೂರು ಅರಣ್ಯ ವಲಯದಲ್ಲಿ ನಡೆದಿದೆ.
ಹಣೆಗೆ ಗುಂಡಿಕ್ಕಿ ಆ್ಯಸಿಡ್ ಮೂಲಕ ಮಾಂಸಖಂಡವನ್ನು ಸುಟ್ಟು ದಂತ ಕದ್ದು ಪರಾರಿಯಾಗಿರುವ ಘಟನೆ 8-9 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ಈ ಕುರಿತು ಎಸಿಎಫ್ ಅಂಕರಾಜು ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ದಂತಚೋರರು ವೃತ್ತಿಪರ ಬೇಟೆಗಾರರಾಗಿದ್ದು, ಹಣೆಗೆ ಗುಂಡಿಕ್ಕಿದ್ದಾರೆ. ಈ ಹಿಂದೆ ಕೊಡಲಿ, ಪಿಕಾಸಿ ಮೂಲಕ ದಂತ ಕೀಳುತ್ತಿದ್ದರು. ಆದರೆ ಇವರು ಆ್ಯಸಿಡ್ ಮೂಲಕ ಮಾಂಸಖಂಡಗಳನ್ನು ಸುಟ್ಟು ದಂತ ಕಿತ್ತಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ನಾಡ ಬಂದೂಕು ಉಪಯೋಗಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ 10-12 ವರ್ಷಗಳಿಂದ ಮರೆಯಾಗಿದ್ದ ದಂತಚೋರರು ಮತ್ತೆ ವೃತ್ತಿ ಆರಂಭಿಸಿರುವುದು ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಹಣೆಗೆ ಗುಂಡಿಕ್ಕಿ ಆ್ಯಸಿಡ್ ಮೂಲಕ ಮಾಂಸಖಂಡವನ್ನು ಸುಟ್ಟು ದಂತ ಕದ್ದು ಪರಾರಿಯಾಗಿರುವ ಘಟನೆ 8-9 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ಈ ಕುರಿತು ಎಸಿಎಫ್ ಅಂಕರಾಜು ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ದಂತಚೋರರು ವೃತ್ತಿಪರ ಬೇಟೆಗಾರರಾಗಿದ್ದು, ಹಣೆಗೆ ಗುಂಡಿಕ್ಕಿದ್ದಾರೆ. ಈ ಹಿಂದೆ ಕೊಡಲಿ, ಪಿಕಾಸಿ ಮೂಲಕ ದಂತ ಕೀಳುತ್ತಿದ್ದರು. ಆದರೆ ಇವರು ಆ್ಯಸಿಡ್ ಮೂಲಕ ಮಾಂಸಖಂಡಗಳನ್ನು ಸುಟ್ಟು ದಂತ ಕಿತ್ತಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ನಾಡ ಬಂದೂಕು ಉಪಯೋಗಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ 10-12 ವರ್ಷಗಳಿಂದ ಮರೆಯಾಗಿದ್ದ ದಂತಚೋರರು ಮತ್ತೆ ವೃತ್ತಿ ಆರಂಭಿಸಿರುವುದು ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

No comments:
Post a Comment