ಮಂಗಳೂರು: ಶಾಸಕ ಪ್ರೀತಂಗೌಡ ಆಗಲಿ, ಯಾರೇ ಆಗಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಈ ರೀತಿ ಮಾತನಾಡುವುದನ್ನು ದೇವರು ಮೆಚ್ಚಲ್ಲ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಸನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಘರ್ಷಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ದೇವೇಗೌಡರಿಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಗಲಾಟೆ ಎಲ್ಲಾ ಮಾಡುವುದಕ್ಕೆ ಹೋಗಬೇಡಿ. ನಮ್ಮ ನಡುವೆ ದೇವರೊಬ್ಬನಿದ್ದಾನೆ. ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ. ಎಲ್ಲವನ್ನು ದೇವರಿಗೆ ಬಿಟ್ಟು ಬಿಡಿ, ದೇವರಿಗಿಂತ ದೊಡ್ಡವರು ನಾವಲ್ಲ ಎಂದು ಪೂಜಾರಿ ಹೇಳಿದರು.
ಆಪರೇಷನ್ ಕಮಲದ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಆಪರೇಷನ್ ಮಾಡುವುದು ಹವ್ಯಾಸವಾಗಿದೆ. ಪ್ರಾಣ ಹೋದರೂ ಅವರು ಆಪರೇಷನ್ ನಿಲ್ಲಿಸುವುದಿಲ್ಲ. ಆಪರೇಷನ್ ಕಮಲ ಯಡಿಯೂರಪ್ಪ ಅವರಿಗೆ ರಾಷ್ಟ್ರಮಟ್ಟದಲ್ಲಿ ಕೆಟ್ಟ ಹೆಸರು ತಂದಿದೆ ಎಂದು ಅವರು ಹೇಳಿದರು.
No comments:
Post a Comment