ABC

Thursday, 14 February 2019

ಪುಲ್ವಾಮ ದಾಳಿಯಲ್ಲೂ ಟ್ವೀಟ್ ಮಾಡಿ ರಾಜಕೀಯ ನಡೆಸಿದ ಜಗ್ಗೆಶ್ ವಿರುದ್ಧ ಗರಂ ಆದ ನೆಟ್ಟಿಗರು

ನೆನ್ನೆ ನಡೆದಂತಹ ಪುಲ್ವಾಮ ದಾಳಿ ಕುರಿತಂತೆ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಭಾರತೀಯರೇ ನಾವು 2019 ರಲ್ಲಿ ಎಚ್ಚರ ತಪ್ಪಿ ಸ್ವಾರ್ಥಿಗಳ ನಾಟಕ ನಂಬಿ, ನತದೃಷ್ಟರಿಗೆ ದೇಶ ಅರ್ಪಿಸಿದರೆ ಇಂಥ ಅನಾಹುತಗಳು ದೇಶವ್ಯಾಪಿ ಮುಂದುವರೆಯುತ್ತದೆ ಎಚ್ಚರಿಕೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್ ಗೆ ಪರವಿರೋಧಗಳು ವ್ಯಕ್ತವಾಗಿದ್ದು, ಏನ್ ಸರ್ ನೀವು ನೋವಿನಲ್ಲೂ ರಾಜಕೀಯ ಬೇಕಿತ್ತಾ, ಈ ದೇಶಕ್ಕೆ ಯಾರು ಬೇಕು ಬೇಡ ಅದನ್ನು ಆಮೇಲೆ ಯೋಚಿಸೋಣ, ಇದು ಯೋಧರ ಕುಟುಂಬದ ನೋವಿನಲ್ಲೂ ಭಾಗಿಯಾಗೋ ಸಮಯ. ಈಗ ಅದನಷ್ಟೇ ಮಾಡೋಣ ಎಂದು ವ್ಯಕ್ತಿಯೊಬ್ಬರು ಕಮೆಂಟ್  ಕೂಡ ಮಾಡಿದ್ದಾರೆ. ರಾಜಕೀಯವನ್ನು ಎಲ್ಲಿ ಬೇಕಂದರಲ್ಲಿ ಬಳಸಿ ಅದಕ್ಕೆ ಅರ್ಥವೇ ಇಲ್ಲದಂತೆ ಆಗುತ್ತಿದೆ..

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...