ABC

Thursday, 7 February 2019

ಈ ಬಾರಿಯ ಬಜೆಟ್​ನಲ್ಲಿನ ಪ್ರಮುಖಾಂಶಗಳು ಈ ಕೆಳಗಿವೆ: ಎಚ್ ಡಿ ಕುಮಾರಸ್ವಾಮಿ

ಈ ದಿನದ ಬಜೆಟ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದ ರಾಜ್ಯ ಬಜೆಟ್ ಒಟ್ಟಿನಲ್ಲಿ ಈ ಬಾರಿಯ ಬಜೆಟ್ ರೈತರ ಪರ ಹಾಗೂ ಸಾಮಾನ್ಯ ವರ್ಗದವರ ಬಜೆಟ್ ಎಂದೇ ಹೇಳಬಹುದು.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಎರಡನೇ ಬಜೆಟ್​ ಮಂಡನೆ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಗರಿಗೆದರಿದ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಬಜೆಟ್​ ಮಂಡನೆ ಆರಂಭವಾಗಿದೆ. ಇದರ ಹಿಂದೆಯೇ ಬಿಜೆಪಿ ಶಾಸಕರು ಸದನವನ್ನು ಧಿಕ್ಕರಿಸಿ ಹೊರನಡೆದಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ವಿಸ್ತಾರವಾದ ಬಜೆಟ್​ ಮಂಡಿಸಿದರು. ಈ ಬಾರಿಯ ಬಜೆಟ್​ನಲ್ಲಿನ ಪ್ರಮುಖಾಂಶಗಳು ಈ ಕೆಳಗಿವೆ.

ಬಜೆಟ್​ ಹೈಲೈಟ್ಸ್​:

ರೈತರ ಸಾಲಮನ್ನಾಗೆ 46 ಸಾವಿರ ಕೋಟಿ ರೂ.
ರೈತರಿಂದ ಕೃಷಿಉತ್ಪನ್ನ ಖರೀದಿಸಿ ಮಾರಾಟ ಮಾಡಲು ವ್ಯವಸ್ಥೆ
600 ಸಂತೆಗಳನ್ನುತಲಾ 1ಕೋಟಿ ವೆಚ್ಚದಲ್ಲಿಸ್ಥಾಪಿಸುವುದು
ರೈತರ ಬೆಳೆಗೆ ಸಾವಿರ ಕೋಟಿ ಬೆಂಬಲ ಬೆಲೆ ಘೋಷಣೆ
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ
ಕಬ್ಬು ಬೆಳೆಗಾರರ ಬಾಕಿ ಕೊಡಿಸಲು ಹೊಸಕಾಯ್ದೆ
ಶೂನ್ಯ ಬಂಡವಾಳ ಸಂಬಂಧಿಸಿದ ಕೃಷಿಗೆ ಆದ್ಯತೆ
ಕಡಿಮೆ ವೆಚ್ಚ-ಹೆಚ್ಚು ಉತ್ಪಾದನೆಯ ಗುಂಪು ಕೃಷಿಯೋಜನೆ
ಮಹಿಳಾ ರೈತರಿಗೆ ವಿಶೇಷ ಕೃಷಿಪ್ಯಾಕೇಜ್
ಫಸಲ್ ಭೀಮ ಯೋಜನೆಗೆ ಪರ್ಯಾಯ ಸ್ಕೀಮ್
ರಾಜ್ಯ ಸರ್ಕಾರ ಪ್ರಾಯೋಜಿತ ಬೆಳೆ ವಿಮೆ ಯೋಜನೆ
ಇಸ್ರೇಲ್ಮಾದರಿ ಕೃಷಿ ತಂತ್ರಜ್ಞಾನ ಜಾರಿ
ಎಲ್ಲನಗರಗಳಲ್ಲಿಬಡವರ ಬಂಧು ಕಾರ್ಯಕ್ರಮ ವಿಸ್ತರಣೆ
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಸ ಪಾಸ್
ಕೇಂದ್ರೀಯ ವಿದ್ಯಾಲಯಮಾದರಿಯಲ್ಲಿ ಪಬ್ಲಿಕ್ ಸ್ಕೂಲ್
1 ರಿಂದ 10 ನೇ ತರಗತಿವರೆಗೆ ಒಂದೇ ಶಾಲೆ
4 ವರ್ಷದಲ್ಲಿ 1000 ಸ್ಕೂಲ್ ಘೋಷಣೆ ಸಾಧ್ಯತೆ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಶಾಲೆ
ಸರ್ಕಾರಿ ಶಾಲೆಗಳು ಇಂಗ್ಲಿಷ್ ಮಧ್ಯಮ ಕಡ್ಡಾಯ
ದುಸ್ಥಿತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಯೋಜನೆ
ಮಲೆನಾಡು ಶಾಲಾ ವಿದ್ಯಾರ್ಥಿಗಳಿಗೆ ಛತ್ರಿ, ರೈನ್ ಕೋಟ್ ಭಾಗ್ಯ ‘
ಆರೋಗ್ಯ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿವಿಶೇಷ ಸ್ಕೀಮ್
ಎಲ್ಲಾಜಿಲ್ಲೆಯಲ್ಲಿಸರ್ಕಾರಿ ಆಯುರ್ವೇದಿಕ್ ಹೋಮಿಯೋಪತಿ
ಬೆಳಗಾವಿ – ಖಾನಾಪುರದಲ್ಲಿತಾಯಿ ಮಕ್ಕಳ ಆಸ್ಪತ್ರೆ
ಹುಬ್ಬಳ್ಳಿಯಲ್ಲಿಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ
10 ವರ್ಷ ಸೇವೆಸಲ್ಲಿಸಿ ನಿವೃತ್ತರಾಗುವ ಆಶಾ ಕಾರ್ಯಕರ್ತೆಯರಿಗೆ 50,000 ಪರಿಹಾರ
ಎಲ್ಲಾಜಿಲ್ಲೆಗಳಲ್ಲಿರುವ ಔಷದಿ ಅಂಗಡಿಗಗಳಿಗೆ ಸ್ವಂತ ಕಟ್ಟಡ ಭಾಗ್ಯ


ಶಿವಮೊಗ್ಗದಲ್ಲಿಮಂಗನ ಕಾಯಿಲೆ ತಡೆಗಟ್ಟಲು ಸಂಶೋಧನಾ ಕೇಂದ್ರ
ಮನೆ ಕಟ್ಟುವವರಿಗೆ ಪ್ರೋತ್ಸಾಹ ಧನ ಹೆಚ್ಚಳ
ಈಗಿರುವ ₹1.20 -2 ಲಕ್ಷ ಹಣ5 ಲಕ್ಷದವರೆಗೂ ಹೆಚ್ಚಳ
ಹಸುಗಳನ್ನು ಕಟ್ಟಿಕೊಳ್ಳಲು ಪಶು ಕುಟೀರ ಭಾಗ್ಯ
ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಹೆಚ್ಚು ಹಣ ನಿಗದಿ
ಮುಜರಾಯಿ ದೇವಸ್ಥಾನಗಳಲ್ಲಿಅರ್ಚಕರ ಸಹಾಯಧನ ಹೆಚ್ವಳ
ವರ್ಷಕ್ಕೆ 48,000 ರೂ ಹಣ 60,000ಕ್ಕೆ ಏರಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ
ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ
ನಿರುದ್ಯೋಗಿ ಯುವಕರಿಗೆ ಗ್ರಾ.ಪಂ.ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ
ತಿಂಗಳಿಗೆ ಗಿಡನೆಟ್ಟು ಪೋಷಿಸಲು 5 ಸಾವಿರ ರೂಪಾಯಿ ವೇತನ


KRS ಬಳಿ ಡಿಸ್ನಿಲ್ಯಾಂಡ್ಮಾದರಿಯಲ್ಲಿ ಪ್ರವಾಸಿತಾಣ
ಮೇಕೆದಾಟು ಯೋಜನೆಗೆ ಹೆಚ್ಚುವರಿ ಹಣ
ರೈತರ ಪಂಪ್​ ಸೆಟ್​ಗೆ ಬಂಪರ್ ಅನುದಾನ
ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲಧಾರೆ
ಮಳೆ ನೀರು ಸಂಗ್ರಹದ ಜಲಾಮೃತಯೋಜನೆ
ಸಮಾಜ ಕಲ್ಯಾಣ ಇಲಾಖೆಗೆ
ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಹೊಸಯೋಜನೆ
ಬೋರ್ವೆಲ್ಕೊರೆಸುವ ಗಂಗಾ ಕಲ್ಯಾಣಕ್ಕೆ ಅನುದಾನ ಹೆಚ್ಚಳ
ಲೋಕೋಪಯೋಗಿ ಇಲಾಖೆಗೆ
ಚರಂಡಿ ಮೂಲಭೂತಸೌಕರ್ಯ ಅಭಿವೃದ್ಧಿಗೆ ಅನುದಾನ
ಮಹಾನಗರಪಾಲಿಕೆ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ಅನುದಾನ

ಸರ್ಕಾರಿ ನೌಕರರಿಗೆ ಬಂಪರ್
ಸರ್ಕಾರಿ ನೌಕರರಿಗಿರುವ ಅನುದಾನ ಹೆಚ್ಚಳ
ನಿವೃತ್ತ ವಯೋಮಿತಿ 60 ವರ್ಷದ ಬದಲು 65 ವರ್ಷಕ್ಕೆ
ಸರ್ಕಾರಿ ಸಿಬ್ಬಂದಿಗೆ 4ನೇಶನಿವಾರ ರಜೆ ಘೋಷಣೆ ಸಾಧ್ಯತೆ
ನೂತನ ಪಿಂಚಣಿ ಯೋಜನೆ ರದ್ದು ಮಾಡುವ ಸಾಧ್ಯತೆ
ಔರಾದ್ಕರ್ವರದಿಯಂತೆ ಪೊಲೀಸರಿಗೆ ಸಮಾನ ವೇತನ ಘೋಷಣೆ

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...