ಮಂಡ್ಯದಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಟಿಕೆಟ್ ಉಚಿತವಾಗಿ ಹಂಚಲಾಗುತ್ತಿದೆ. ಸಿಎಂ ಪುತ್ರ ನಿಖಿಲ್ ಚಿತ್ರ ನೋಡಲು ಮನೆಮನೆಗೆ ಟಿಕೆಟ್ ತಲುಪಿಸುವ ಕಾರ್ಯ ನಡೆದಿದೆ ಎನ್ನುವ ರೂಮರ್ ಕೇಳಿ ಬಂದಿತ್ತು. ಈ ಬಗ್ಗೆ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಟಿಕೆಟ್ ಪುಕ್ಸಟ್ಟೆಯಾಗಿ ವಿತರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾವು ಅಷ್ಟೊಂದು ಅಗ್ಗದ ರಾಜಕಾರಣ ಮಾಡೋದಿಲ್ಲ ಎಂದು ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿಯವರು ಮಗ ನಿಖಿಲ್ರ ಚಿತ್ರಕ್ಕೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದಾರೆ. ಸೀತಾರಾಮ ಕಲ್ಯಾಣ ಶೂಟಿಂಗ್ ಪ್ರಾರಂಭದಿಂದ ಹಿಡಿದು ತೆರೆಗೆ ಕಾಣುವವರೆಗೂ ಪ್ರತಿಯೊಂದನ್ನು ಗಮನಿಸಿ, ಸೂಕ್ತ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಎಲ್ಲಾ ಪಕ್ಷಗಳ ನಾಯಕರಿಗೆ ಪುತ್ರನ ಸಿನಿಮಾ ಶೋ ಏರ್ಪಡಿಸಿದ್ದರು.
ಇನ್ನು ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಗೌಡ, ರಚಿತಾರಾಮ್ ನಟಿಸಿದ್ದಾರೆ. ಎ.ಹರ್ಷಾ ನಿರ್ದೇಶನ ಚಿತ್ರಕ್ಕಿದೆ. ಅನೀತಾ ಕುಮಾರಸ್ವಾಮಿ ಹಣ ಹಾಕಿದ್ದಾರೆ. ಈಗಾಗಲೇ 20 % ಲಾಭ ಬಂದಿದೆ ಎಂದು ಮೊನ್ನೆಯಷ್ಟೆ ಚಿತ್ರತಂಡ ಹೇಳಿಕೊಂಡಿದೆ.
ಇಷ್ಟು ಲಾಭ ಬಂದಿದೆ ಅಂದ್ರೆ ನಾವು ಫ್ರೀಯಾಗಿ ಹಂಚಿದರೆ ಲಾಭ ಹೇಗೆ ಬರುತ್ತದೆ ಇದು ಕಿಡಿಗೇಡಿಗಳ ಅಪಪ್ರಚಾರವೇ ಸರಿ.
No comments:
Post a Comment