ABC

Tuesday, 12 March 2019

ಹೆಸರು ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಕೂಟದ ಅಭ್ಯರ್ಥಿ.

ಹೆಸರು ನಿಖಿಲ್ ಕುಮಾರಣ್ಣ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಕೂಟದ ಅಭ್ಯರ್ಥಿ.
ಮಳವಳ್ಳಿ ಮೇಲುಕೋಟೆ ಕೆ.ಆರ್.ಪೇಟೆ ಮಳವಳ್ಳಿ ಶ್ರೀರಂಗಪಟ್ಟಣ ನಾಗಮಂಗಲ ಮಂಡ್ಯ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಒಳಗೊಂಡಿರುವುದು ಈ ಲೋಕಸಭಾ ಕ್ಷೇತದ ಹೆಗ್ಗಳಿಕೆ.
ಸರಿಸುಮಾರು 19 ಲಕ್ಷ ಮತದಾರ ಪ್ರಭುಗಳು ಹಕ್ಕು ಚಲಾಯಿಸಲಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಮಡಿಲಲ್ಲಿದೆ.
ನಿಖಿಲಣ್ಣ ಪಕ್ಕಾ ಕುಮಾರಣ್ಣರ ಹೃದಯವಂತಿಕೆ ನೇರವಂತಿಕೆ ಮಾನವೀಯತೆಯ ಮಮಕಾರದ ಪ್ರೀತಿಯ ಪ್ರತಿಬಿಂಬ.
ಗೆಲುವು ಅನ್ನೋದು ಬೆನ್ನಿಂದೆ ಇದ್ದರೂ ಅಖಾಡಕ್ಕೆ ಇಳಿದು ಅಗ್ನಿಪರೀಕ್ಷೆ ಭೇದಿಸಿ ಬರಲು ಹೊರಟಿರುವ ಚಕ್ರವ್ಯೂಹದ ಅಭಿಮನ್ಯು.
ಕರುನಾಡ ಕುಮಾರಣ್ಣ ಕೊಟ್ಟಿರುವ ಅಪಾರ ಅನುದಾನದ ಕೊಡುಗೆಯೆ ನಿಖಿಲ್ ಕುಮಾರಣ್ಣರಿಗೆ ಗೆಲುವಿನ ಶ್ರೀರಕ್ಷೆ…..
ಭದ್ರಕೋಟೆ ಕಟ್ಟಿಕೊಂಡು ಪಟ್ಟದ ಮೇಲೆ ಕುಳಿತಿರುವ ನಮ್ಮ ಕುಮಾರಣ್ಣ ರ ಅಭಿವೃದ್ಧಿ ಮುಂದೆ ಯಾವ ಅನುಕಂಪವೂ ಕೆಲಸ ಮಾಡವುದಿಲ್ಲ ಎಂಬುದು ಈಗ ಜನರ ಬಾಯಲ್ಲೆ ಹಾಸುಹೊಕ್ಕಿದೆ.
ನೈಜಚಿತ್ರಣ ಬೇರೆಯೆ ಇದ್ದರೂ ಸುಮ್ಮನೆ ಕಪೋಲಕಲ್ಪಿತ ಸುದ್ದಿಗಳು ಅವರವರ ಬಾಯಿ ಚಪಲಕ್ಕಷ್ಟೆ ಸೀಮಿತವಾಗಿದೆ.
ಗೆಲುವಿನ ನಾಗಾಲೋಟದಲ್ಲಿರುವ ನಿಖಿಲಣ್ಣರಿಗೆ ರೈತರ ಅನ್ನದಾತರ ದಿವ್ಯಾಶಿರ್ವಾದ ಈಗಾಗಲೇ ಲಭ್ಯವಾಗಿದೆ.
ತಾವು ಆಸ್ತಿ ಬಯಸಿಲ್ಲ ಮಂಡ್ಯ ಜನರೇ ನನಗೆ ದೊಡ್ಡ ಆಸ್ತಿ ಎನ್ನುವ ಪ್ರೌಢಿಮೆಯ ಹೇಳಿಕೆ ನಿಖಿಲ್ ರವರ ಜ್ಞಾನ ಒರೆಗೆ ಹಚ್ಚಿದ್ದು ನಿಜಕ್ಕೂ ಪ್ರಾಮಾಣಿಕವಾಗಿ ಇವರು ಜನರ ಜೊತೆ ಬೆರೆತು ಜನರೊಳಗೆ ಜನರ ಜೊತೆಗೆ ಲೀನವಾಗುತ್ತಾರೆ ಎನ್ನುವ ಸಂಕೇತ ಈಗ ಕ್ಷೇತ್ರದಲ್ಲಿ ಎಲ್ಲಾ ಕಡೆ ಕಂಡು ಬರುತ್ತಿದೆ.
ಅತ್ಯುತ್ತಮ ವಾಕ್ಚಾತುರ್ಯದ ಮೂಲಕ ತಮ್ಮ ತಂದೆಯ ಮಾನವೀಯತೆಯ ಮುಖವನ್ನು ಇವರೂ ಸಹ ಅನುಸರಿಸುವ ಮೂಲಕ ಈಗಾಗಲೇ ಮನೆಮಗನಂತೆ ಗೋಚರವಾಗುತ್ತಿರುವ ನಿಖಿಲ್ ಕುಮಾರಣ್ಣರು ಮಣ್ಣಿನ ಮೊಮ್ಮಗನಾಗಿ ರೂಪುಗೊಳ್ಳುತ್ತಿರುವುದು ರೈತರ ಬಾಳು ಹಸನಾಗುತ್ತಿರುವುದರ ಸಂಕೇತ.
ತಮ್ಮ ಸಹನೆ ಸರಳತನ ಮನಮಿಡಿಯುವ ಹೃದಯವಂತಿಕೆ ಮುಖಾಂತರವೇ ಮತದಾರರಿಗೆ ಹತ್ತಿರವಾಗುತ್ತಿರುವ ನಿಖಿಲ್ ಕುಮಾರಣ್ಣರು ನಿಜಕ್ಕೂ ಅತ್ಯದ್ಭುತ ಬಹುಮತದಿಂದ ಆರಿಸಿ ಬರುವುದರಲ್ಲಿ ಬಹುಶಃ ಯಾವುದೇ ಆನುಮಾನವಿಲ್ಲ.
ವಿರೋಧಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಸೇವೆಯ ವೈಖರಿ ಯಾವ ರೀತಿ ಸಾಗುತ್ತದೆ ಮತ್ತು ತಾವು ಸಂಸತ್ ಪ್ರವೇಶಿಸಿದರೆ ತಮಗೆ ಯಾವ ರೀತಿ ಸೇವೆ ಮಾಡುವೆನು ಎನ್ನುವುದನ್ನು ಮನದಟ್ಟು ಮಾಡಿದ್ದೆ ಆದರೆ ವಿರೋಧಿಗಳ ಅಟ್ಟಹಾಸ ಕೊನೆಗೊಂಡು ಸ್ಪಷ್ಟ ಬಹುಮತದಿಂದ ಅತಿ ಹೆಚ್ಚಿನ ಅಂತರದಿಂದ ಆರಿಸಿ ಬರುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಆಶಿಸುತ್ತ ನಿಖಿಲ್ ಕುಮಾರಣ್ಣರು ವಿಜಯಮಾಲೆ ವಿಜಯ ಮಾಲೆಯನ್ನು ಹಾಕಿ ಕಳುಹಿಸಿ ಮಂಡ್ಯ ಜನತೆ ಆಶೀರ್ವದಿಸಿ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...