ABC

Friday, 1 February 2019

ಯಡಿಯೂರಪ್ಪ ನಂ.1 ರೈತ ವಿರೋಧಿ: ಮಾಜಿಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯ

ಬೆಂಗಳೂರು: ದೇಶದ ರೈತರ ನಿರೀಕ್ಷೆ ಹುಸಿಯಾಗಿದೆ ಸಾಲ ಮನ್ನಾ ಮಾಡಿಲ್ಲ, ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಬಗ್ಗೆ ವ್ಯಂಗ್ಯ ಮಾಡಿದ್ದರು ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಕುಮಾರಸ್ವಾಮಿ ಸರ್ಕಾರ ಲಾಲಿಪಾಪ್ ಕೊಟ್ಟಿದೆ ಅಂದಿದ್ದರು ಈಗ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವರು ವರ್ಷಕ್ಕೆ ರೈತರ ಅಕೌಂಟಿಗೆ ೬ ಸಾವಿರ ನೀಡ್ತಾರಂತೆ ಪ್ರತಿದಿನಕ್ಕೆ ೧೭ ರೂ. ಸಿಗುತ್ತದೆ ಇದಕ್ಕೆ ನಾವು ಲಾಲಿಪಾಪ್ ಅನ್ನಬೇಕಾ, ಪೆಪ್ಪರ್ ಮೆಂಟ್ ಅನ್ನಬೇಕಾ? ಎಂದು ಮೋದಿ ಬಜೆಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಅಸಂಘಟಿತ ಕಾರ್ಮಿಕರಿಗೆ ಪೆನ್ಶನ್ ಕೊಡ್ತೀವಿ ಅಂತ ಘೋಷಿಸಿದ್ದಾರೆ. ೬೦ ವರ್ಷದ ಬಳಿಕ ೩ ಸಾವಿರ ಬರುತ್ತೆ ಇದು ಮೋಡ ತೋರಿಸಿ ಮಳೆ ಬರುತ್ತೆ ಅಂತ ಆಸೆ ಹುಟ್ಟಿಸುವಂತಹ ಭರವಸೆ ರೈತ ವಿರೋಧಿ, ಯುವಕರ ವಿರೋಧಿ, ಜನಸಾಮಾನ್ಯರ ವಿರೋಧಿ ಈ ಬಜೆಟ್ ಎಂದು ಕೇಂದ್ರದ ವಿರುದ್ಧ ಗುಡುಗಿದರು.
ಕೇಂದ್ರ ಬಜೆಟ್ ಮಧ್ಯಂತರ ಬಜೆಟ್ ಮಂಡಿಸಿದೆ ಯುವಕರಿಗೆ ನಿರಾಶಾದಾಯಕ ಬಜೆಟ್ ಯುವಕರಿಗೆ ನಿರಾಶಾದಾಯಕ  ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಹೆಚ್ಚಾಗಿದದ್ದು, ಎನ್ಎನ್ಎಸ್ಒ ಮಾಹಿತಿ ಬಹಿರಂಗಪಡಿಸಿದೆ  ಮೋದಿ ಅವಧಿಯಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಕಳೆದ ೪೫ ವರ್ಷಗಳಲ್ಲಿ ಇಲ್ಲದಷ್ಟು ಹೆಚ್ಚಾಗಿದೆ. ಇದು ಗೊತ್ತಿದ್ದರೂ ನಿರುದ್ಯೋಗ ಪರಿಹಾರಕ್ಕೆ ಮುಂದಾಗಿಲ್ಲ ಹೀಗಾಗಿ ಯುವಕರಿಗೆ ತೀವ್ರ ನಿರಾಸೆಯನ್ನ ತಂದಿದೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದೊಂದು ಬಿಜೆಪಿ ಚುನಾವಣೆ ಬಜೆಟ್  ಇದೆಲ್ಲ ಹೇಳಿದ್ದರೂ ಜನರಿಗೆ ವಿಶ್ವಾಸ ಮೂಡಿಸೋದು  ಕಷ್ಟ. ಅಚ್ಚೇದಿನ್ ಬರುತ್ತೆ ಅಂತ ಹೇಳಿದ್ದರು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಯ್ತು, ೨ ಕೋಟಿ ಉದ್ಯೋಗ ಸೃಷ್ಠಿಯೂ ಕನಸಾಗಿ ಉಳಿದಿದೆ. ೧೫ ಲಕ್ಷ ಬ್ಲಾಕ್ ಮನಿ ಹಾಕ್ತೇವೆ ಅಂದ್ರು ಅದೂ ಸುಳ್ಳಾಯ್ತು ಮೋದಿಯವರು ಚೌಕಿದಾರ್ ಅಲ್ಲ ಬಾಗಿದಾರ್ ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.
ಯಡಿಯೂರಪ್ಪ ನಂ.೧ ರೈತ ವಿರೋಧಿ ೨೦0೯ರಲ್ಲಿ ಗೋಲಿಬಾರ್ ಮಾಡಿಸಿದ್ದು ಮಿಸ್ಟರ್ ಯಡಿಯೂರಪ್ಪ ಇಂತವರು ಇನ್ನೇನು ಹೇಳ್ತಾರೆ. ನೋಟ್ ಪ್ರಿಂಟ್ ಮಾಡೋ ಮಿಷಿನ್ ಇಲ್ಲಾ  ಅಂದವರು ಯಾರು? ಮೋದಿ ಕೊಟ್ಟ ಭರವಸೆಯೇನು? ಎಷ್ಟು ಭರವಸೆ ಈಡೇರಿಸಿದ್ದಾರೆ.

ನಾವು ೧೬೫ ಭರವಸೆ ನೀಡಿದ್ದೆವು,ಎಲ್ಲವನ್ನೂ ಈಡೇರಿಸಿದ್ದೇವೆ ಬಿಎಸ್ ಯಡಿಯೂರಪ್ಪ  ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಈ ಭಾರಿ ಸೋಲುವುದು ನಿಶ್ಚಿತ ಅದು ನಿಮಗೂ ಗೊತ್ತು, ನಮಗೂ ಗೊತ್ತಿದೆ ಎಂದು ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...